ಬಿದ್ದ ವಿದ್ಯುತ್ ತಂತಿಯ ಮೇಲೆ ಹೋದ ಬೈಕು ಸವಾರ: ಬೈಕ್ ಸಮೇತ ಸಜೀವ ದಹನ..!

0

ಬೆಳ್ಳಾರೆ : ದಕ್ಷಿಣ ಕನ್ನಡ ಜಿಲ್ಲೆಯ ಪಂಜ ವ್ಯಾಪ್ತಿಯ ನಿಂತಿಕಲ್ಲಿನ, ಕಲ್ಲೇರಿ ಗುಳಿಗನ ಕಟ್ಟೆ ಬಳಿ ಮಂಗಳವಾರ ಮುಂಜಾನೆ ಬೈಕ್ ಸವಾರನೊಬ್ಬ ರಸ್ತೆಯಲ್ಲಿ ಇದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಜೀವ ದಹನಗೊಂಡ ಘಟನೆ ನಡೆದಿದೆ.

ರಸ್ತೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದೇ ಈ ಘೋರ ದುರಂತಕ್ಕೆ ಕಾರಣವಾಗಿದ್ದು ಸಜೀವ ದಹನಗೊಂಡ ಸವಾರ ಸುಳ್ಯದ ಮಂಡೆಕೋಲು ಗ್ರಾಮದ ಯುವಕ ಎಂಬ ಮಾಹಿತಿ ಲಭಿಸಿದೆ. ಸುಮಾರು 5.44 ರ ಹೊತ್ತಿಗೆ ಈ ಘಟನೆ ನಡೆದಿರಬಹುದೆಂದು ಊಹಿಸಲಾಗಿದೆ.

ಸವಾರನ ಮತ್ತು ವಾಹನ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.ಬೈಕ್ ಸವಾರನ ವಿವರ ತಿಳಿದು ಬರಬೇಕಿದೆ.

ವಿದ್ಯುತ್ ಕಂಬದ‌ ತಂತಿ ತಪ್ಪಿ ರಸ್ತೆಗೆ ಬಿದ್ದು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.ಹಲವಾರು ಕಡೆಗಳಲ್ಲಿ ಹಳೇ ವಿದ್ಯುತ್ ತಂತಿಗಳು ಇರುವುದೇ ಇಂತಹ ದುರಂತಗಳಿಗೆ ಕಾರಣ ಎಂಬುದಾಗಿ ಸಾರ್ವಜನಿಕರ ಆರೋಪವಾಗಿದೆ.

See also  ಕುಂದಾಪುರ: ನಿಯಂತ್ರಣ ಕಳೆದು ಕೆರೆಗೆ ಬಿದ್ದ ಕಾರು , ತಪ್ಪಿದ ಭಾರಿ ಅನಾಹುತ!

LEAVE A REPLY

Please enter your comment!
Please enter your name here