ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪು ಗುಡ್ಡೆಯಲ್ಲಿ ಅನ್ಯಕೋಮಿನ ಜೋಡಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.
ಸಿಕ್ಕಿಬಿದ್ದ ವ್ಯಕ್ತಿ ಮೂಡಬಿದಿರೆಯ ಜುನೈದ್ ಎಂಬಾತ ಎಂದು ತಿಳಿದು ಬಂದಿದೆ.ಕೈರಂಗಳ ವಿದ್ಯಾನಗರದ ಹಿಂದೂ ಯುವತಿಯೊಂದಿಗೆ ಮುಡಿಪು ಬೆಟ್ಟದಲ್ಲಿ ಜುನೈದ್ ಒಟ್ಟಿಗೆ ಇದ್ದಾಗ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಸಿಕ್ಕಿಬಿದ್ದಿದ್ದಾನೆ.ಇಬ್ಬರಿಗೂ ಸ್ಥಳೀಯರು ಥಳಿಸಿ ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಈ ಯುವತಿಗೆ ಇನ್ಸ್ಟಾಗ್ರಾಂ ಮೂಲಕ ಈ ಯುವಕನ ಪರಿಚಯವಾಯಿತು.ನಂತರ ಕಳೆದ ಒಂದು ವಾರದಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಮೂರು ಘಟನೆಗಳು ನಡೆದಿದ್ದು ಬೋಳಿಯಾರ್ ಬಳಿ ಯುವಕನಿಂದ ಅತ್ಯಾಚಾರ ಯತ್ನ ನಡೆದಿದೆ. ಬಾಳೆಪುಣಿ ಪುಣ್ಯಕೋಟಿ ನಗರದ ಬಳಿ ಯುವತಿಯ ಅತ್ಯಾಚಾರ ಯತ್ನ ನಡೆದಿತ್ತು. ಇದೀಗ ಮುಡಿಪುವಿನಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯವಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಯಲಾಗಿದೆ.
ಕೊಣಾಜೆ ಪೊಲೀಸರು ಜುನೈದ್ ನ ವಿಚಾರಣೆ ನಡೆಸುತ್ತಿದ್ದಾರೆ.