ಸಾಮಾಜಿಕ ಜಾಲತಾಣಗಳಲ್ಲಿ ದಯಾನಂದ ಕತ್ತಲ್ಸಾರ್ ರವರನ್ನು ಅವಮಾನಿಸಲೆಂದೇ ಹೆಣೆದಿರುವ ಪೋಸ್ಟರ್ ಗಳು ವೈರಲ್ ಆಗುತ್ತಿದ್ದು ಮಾಧ್ಯಮ ಪ್ರತಿನಿಧಿಗಳಾದ ನಾವು ಇದನ್ನು ಖಂಡಿಸಲೇ ಬೇಕು. ವೈಯಕ್ತಿಕ ವಿಷಯಗಳನ್ನು ಕೆದಕಿ ಅವರ ಗೌರವಕ್ಕೆ ಧಕ್ಕೆ ತರುವಂತೆ ರಚಿಸಿರುವ ಪೋಸ್ಟ್ ಗಳನ್ನು ನಾವೂ ವಿರೋಧಿಸುತ್ತೇವೆ ಹಾಗೂ ಇಂತಹ ಸುಳ್ಳು ಸುದ್ಧಿಗಳನ್ನು ಸೃಷ್ಟಿಸುವಂಥಹ ಜನರ ವಿರುದ್ಧ ಕ್ರಮ ಕೈಗೊಳ್ಳಲು ನಾವು ಸಹಕರಿಸುತ್ತೇವೆ.
ದಯಾನಂದ ಕತ್ತಲ್ಸಾರ್ ಅವರ ಮೇಲೆ ನಮಗೆ ಅಪಾರ ಗೌರವವಿದೆ ಹಾಗೂ ನಮ್ಮಿಂದ ಏನಾದರೂ ತಪ್ಪುಗಳಾಗಿದ್ದರೆ ಕರಾವಳಿ ಲೈಫ್ ಕಡೆಯಿಂದ ಕ್ಷಮೆಯಾಚಿಸುತ್ತೇವೆ. ದಯಾನಂದ ಕತ್ತಲ್ಸಾರ್ ಅವರಿಗೆ ಇಂತಹ ಎಷ್ಟೇ ಕಷ್ಟಗಳು ಬಂದರೂ ಅದನ್ನು ಮೆಟ್ಟಿನಿಲ್ಲುವ ಧೈರ್ಯ ಕೊಡಲಿ ಎಂದು ಆಶಿಸುತ್ಹೆವೆ.