ಅಕ್ರಮ ಕಟ್ಟಡ ತೆರವು ಕಾರ್ಯ: ಆತ್ಮಹತ್ಯೆ ಮಾಡುತ್ತೇನೆಂದು ಎಚ್ಚರಿಕೆ ನೀಡಿದ ಯುವಕ!

0

ಆಗಸ್ಟ್ 13: ಕಡಬ ತಾಲೂಕಿನ ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಜಾಗದಲ್ಲಿ ಕಟ್ಟಿದ್ದ ತರಕಾರಿ ಅಂಗಡಿಯೊಂದನ್ನು ತೆರವುಗೊಳಿಸಲು ಬಂದ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದನು. ಇತರ ಅನಧಿಕೃತ ಅಂಗಡಿಗಳನ್ನು ತೆರವು ಮಾಡದೇ ತನ್ನ ಅಂಗಡಿ ತೆರವಿಗೆ ಅಧಿಕಾರಿಗಳು ಮುಂದಾದರೆ ತಾಲೂಕು ಕಚೇರಿ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾನೆ.

ಇದೇ ಪ್ರದೇಶದಲ್ಲಿ ಹಲವಾರು ಅನಧಿಕೃತ ಅಂಗಡಿಗಳು ಇ ದ್ದು ಅದನ್ನು ತೆರವು ಮಾಡಲು ಯಾರೂ ಮುಂದಾಗದೇ ವಿಕಲಚೇತನನಾದ ತನ್ನ ಅಂಗಡಿ ತೆರವು ಮಾಡಬೇಕೆಂದು ಅಧಿಕಾರಿಗಳಿಗೆ ಒತ್ತಡ ಮಾಡುತ್ತಿದ್ದಾರೆ‌. ಇದರಿಂದಾಗಿ ತನ್ನ ಅಂಗಡಿ ತೆರವಾದರೆ ತಾಲೂಕು ಕಚೇರಿ ಮುಂದೆ ಬಂದು ಆತ್ಮಹತ್ಯೆ ಮಾಡುತ್ತೇನೆ ಎಂದು ಸಂದೀಪ್ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದು ಕಡೆ ಕಾಂಗ್ರೆಸ್ ಬೆಂಬಲಿಗರಿಂದ ಬಿಳಿನೆಲೆ ಗ್ರಾಮ ಪಂಚಾಯತ್ ಬಳಿ ಕಟ್ಟಡ ತೆರವು ಮಾಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದು. ಯಾವುದೇ ಕಾರಣಕ್ಕೂ ಕಟ್ಟಡ ತೆರವು ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಬೆಂಬಲಿಗರು ಹೇಳಿದ್ದಾರೆ. ಹೀಗೆ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಮಧ್ಯ ಮಾತಿನ ಜಟಾಪಟಿ ನಡೆದಿದೆ.

See also  ಕಿಶನ್ ಹೆಗ್ಡೆ ಕೊಲೆ ಪ್ರಕರಣ : ಪೊಲೀಸರಿಂದ ಐದು ಹಂತಕರ ಬಂಧನ..!

LEAVE A REPLY

Please enter your comment!
Please enter your name here