ಉಡುಪಿ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ; ಎರಡು ಅಂಗಡಿಗಳು ಭಸ್ಮ !

0

ಉಡುಪಿ, ಸೆಪ್ಟೆಂಬರ್ 16: ಸೆಪ್ಟೆಂಬರ್ 16 ರ ಬುಧವಾರ ಇಲ್ಲಿನ ಸರ್ವಿಸ್ ಬಸ್ ನಿಲ್ದಾಣ ಪ್ರದೇಶದಲ್ಲಿ ಎರಡು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಅಂಗಡಿ ಮಾಲೀಕ ರಘುನಾಥ್ ಹೇಳಿಕೊಂಡಂತೆ ಎರಡೂ ಅಂಗಡಿಗಳಿಗೆ ಭಾರಿ ಹಾನಿಯಾಗಿದೆ ಮತ್ತು 2 ಲಕ್ಷ ರೂ ನಷ್ಟವಾಗಿದೆ.

ಮುಚ್ಚಿದ ಅಂಗಡಿಗಳಲ್ಲಿ ಒಂದು ಶ್ರೀ ಮಲ್ಲಿಕಾರ್ಜುನ್ ಅವರಿಗೆ ಸೇರಿದ್ದು. ಶಾರ್ಟ್ ಸರ್ಕ್ಯೂಟ್ ಮುಂಜಾನೆ 2.30ರ ಸುಮಾರಿಗೆ ಸಂಭವಿಸಿದ. ಪೆಟ್ರೋಲ್ ಡ್ಯೂಟಿಯಲ್ಲಿದ್ದ ಪೊಲೀಸರು ಅಂಗಡಿಗಳಿಂದ ಹೊಗೆ ಹೊರಹೊಮ್ಮುವುದನ್ನು ಗಮನಿಸಿ ಅವರು ಅಂಗಡಿ ಮಾಲೀಕರು ಮತ್ತು ಅಗ್ನಿಶಾಮಕ ದಳಕ್ಕೆ ಸಂಪರ್ಕಕಿಸಿದರು. ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು.

ನಗರ ಕೌನ್ಸಿಲರ್ ಟಿ ಜಿ ಹೆಗ್ಡೆ ಮತ್ತು ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

See also  ಕುಳಾಯಿ: ಭೀಕರ ಅಪಘಾತ! ಮಹಿಳೆಯ ಮೃತ್ಯು

LEAVE A REPLY

Please enter your comment!
Please enter your name here