ಉಡುಪಿ : ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ನಡದೆ ಕಿಶನ್ ಹೆಗ್ಡೆ ಬರ್ಬರ ಕೊಲೆಯ ಹಂತಕರ ಕೆಲವೊಂದು ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎಂದು ತಿಳಿಯಲಾಗಿದೆ.
ಕಿಶನ್ ಹೆಗಡೆಯ ಸ್ನೇಹಿತ ದಿವರಾಜ್ ಶೆಟ್ಟಿಯ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಕಿಶನ್ ಹೆಗ್ಡೆ ಹಾಗೂ ಎರಡು ಜನ ದೇವಸ್ಥಾನಕ್ಕೆ ಬಂದಿದ್ದರು.ಆಗ ಕಾರು ಪಾರ್ಕ್ ಮಾಡಿ ಬರುತ್ತಿರುವಾಗ ಒಂದು ರಿಟ್ಜ್ ಕಾರ್ ಮತ್ತು ಇನ್ನೋವಾ ಕಾರಿನಲ್ಲಿ ಕೊಡಿಕೆರೆ ಮನೋಜ್ ಮತ್ತು ಆತನ ತಂಡ ಬಂದು ಕಿಶನ್ ಹೆಗ್ಡೆ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ.ಮತ್ತು ಹಣಕಾಸಿನ ವಿಚಾರದಲ್ಲಿ ಇವರ ನಡುವೆ ಜಗಳ ಇತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳೂರಿನ ಸುರತ್ಕಲ್ ಸಮೀಪದ ಕೊಡಿಕೆರೆ ಮನೋಜ್ ಈ ಕೊಲೆಯನ್ನು ಮಾಡಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಡಿಕೆರೆ ಮನೋಜ್ ಮೊದಲು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು ನಂತರ ಒಂದು ಕೊಲೆ ಕೇಸಿನಲ್ಲಿ ಜೈಲು ಪಾಲಾಗಿದ್ದ.ಮನೋಜ್ ಮೇಲೆ ಹಲವಾರು ಕೇಸುಗಳಿತ್ತು ಎನ್ನಲಾಗಿದೆ.
ಮನೋಜ್ ಮತ್ತು ಕಿಶನ್ ಹೆಗ್ಡೆ ಮೊದಲು ಬಹಳ ಆತ್ಮೀಯ ಸ್ನೇಹಿತರಾಗಿದ್ದರು.ನಂತರ ದಿನಗಳಲ್ಲಿ ಅವರ ನಡುವೆ ಹಣದ ವಿಚಾರದಲ್ಲಿ ಜಗಳ ನಡೆದು ದ್ವೇಷದಲ್ಲಿದ್ದರು ಎಂದು ತಿಳಿದು ಬಂದಿದೆ.ಕಿಶನ್ ಹೆಗ್ಡೆಗೆ ಭೂಗತ ಲೋಕದ ಸಂಪರ್ಕವಿತ್ತು ಎನ್ನಲಾಗಿದೆ.ನವೀನ್ ಡಿಸಿಲ್ವಾ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿ ನಂತರ ಬಿಡುಗಡೆಯಾಗಿ ಬಂದಿದ್ದ.ಆದರೆ ಈಗ ಕಿಶನ್ ಕೊಲೆಯಾಗಿದೆ.ಕೊಲೆಗೆ ಪ್ರಮುಖ ಕಾರಣ ತಿಳಿದು ಬಂದಿಲ್ಲ.
ಈಗ ಪೊಲೀಸರು ಕೊಡಿಕೆರೆ ಮನೋಜ್ ಮತ್ತು ಆತನ ತಂಡದ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.ಹಿರಿಯಡ್ಕ ಪೊಲೀಸರು ಆರೋಪಿಗಳ ಶೋಧ ಕಾರ್ಯ ಮುಂದುವರಿಸಿದ್ದಾರೆ.ಸದ್ಯದಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಲಿದ್ದಾರೆ.
ಹಂತಕರ ಬಂಧನವಾದ ನಂತರ ಕೊಲೆಯ ಮತ್ತು ಯಾರ ಕೈವಾಡವಿದೆ ಎಂದು ಕಾರಣ ತಿಳಿದು ಬರಬೇಕಿದೆ.ಪೊಲೀಸರು ಕೆಲವರ ವಿಚಾರಣೆ ನಡೆಸುತ್ತಿದ್ದಾರೆ.